ಸಾಧಕರನ್ನು ಸನ್ಮಾನಿಸುವುದು ನಾಗರಿಕ ಸಮಾಜದ ಕರ್ತವ್ಯ : ಉದಯಕುಮಾರ ಶೆಟ್ಟಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಫೆಬ್ರವರಿ 21 , 2015
|
ಫೆಬ್ರವರಿ 21, 2015
|
ಸಾಧಕರನ್ನು ಸನ್ಮಾನಿಸುವುದು ನಾಗರಿಕ ಸಮಾಜದ ಕರ್ತವ್ಯ : ಉದಯಕುಮಾರ ಶೆಟ್ಟಿ
ಚೆಗ್ರಿಬೆಟ್ಟು :
ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವುದು ನಾಗರಿಕ ಸಮಾಜದ ಕರ್ತವ್ಯ. ಇದರಿಂದ ಅವಮಾನ ಅನುಮಾನಗಳನ್ನು ಸಹಿಸಿಕೊಂಡು ಸಾಧನೆ ಮಾಡಿದ ಸಾಧಕರಿಗೆ ನೆಮ್ಮದಿ ದೊರೆತು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ದೊರೆಯುತ್ತದೆ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟಿಯವರು ಹೇಳಿದರು.
ಅವರು ಚೆಗ್ರಿಬೆಟ್ಟಿನ ನಾಗರಿಕರು ಶ್ರೀ ಮಡಾಮಕ್ಕಿ ಮೇಳದ ವೇದಿಕೆಯಲ್ಲಿ ಪಂಚಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ, ಹವ್ಯಾಸಿ ಕಲಾವಿದ ಸುರೇಶ ಆಚಾರ್ಯ, ಪ್ರಸಂಗಕರ್ತ ಹಂದಿಗದ್ದೆ ಸುರೇಶ ಕುಲಾಲ್ ಹಾಗೂ ಸುಮಾರು 80 ಯಕ್ಷ ನೃತ್ಯ ಕಾರ್ಯಕ್ರಮ ನೀಡಿದ 9 ವರ್ಷ ಪ್ರಾಯದ ಬಾಲಕಿ ಕು. ರಶ್ಮಿತಾ ಇವರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು.
ಸೂರಾಲು ಕ್ಷೇತ್ರದ ಅರ್ಚಕ ಕೆ. ಸೀತಾರಾಮ ಅಡಿಗರು ಸನ್ಮಾನ ಕಾರ್ಯಕ್ರಮ ನೆಡಿಸಿಕೊಟ್ಟರು. ಮಡಾಮಕ್ಕಿ ಕ್ಷೇತ್ರದ ಆಡಳಿತ ಮುಕ್ತೇಸರ ಎಂ. ಶಶಿಧರ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ವೆಂಕಟೇಶ ನಾಯಕ್ ಆಗಮಿಸಿದ್ದರು. 50ನೇ ಪ್ರಯೋಗವಾಗುತ್ತಿರುವ ಸುರೇಶ ಕುಲಾಲರ ``ದೈವಸಂಕಲ್ಪ`` ಎಂಬ ಪ್ರಸಂಗದ ಸುವರ್ಣೋತ್ಸವದ ಪ್ರಯುಕ್ತ ಕಲಾವಿದರಿಗೆ ಸ್ಮರಣಿಕೆ ನೀಡಿ ಸಭೆಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಕಾರ್ಯಕ್ರಮದ ಸಂಯ್ಯೋಜಕ ಚೆಗ್ರಿಬೆಟ್ಟಿನ ಉದ್ಯಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮೇಳದ ಕಲಾವಿದರಿಂದ ``ದೈವ ಸಂಕಲ್ಪ`` ಪ್ರಸಂಗದ 50ನೇ ಪ್ರಯೋಗ ಪ್ರದರ್ಶನಗೊಂಡಿತು.
|
|
|